
ವಿಸ್ತಿರ್ಣದಲ್ಲಿ ನಮ್ಮ ಪಂಜಾಬ್ ರಾಜ್ಯಕ್ಕಿಂತ ಚಿಕ್ಕದಾಗಿರುವ ಇರಾಕ್ ದೇಶ ಇಡೀ ಜಗತ್ತಿಗೆ ಪರಿಚಯವಾಗಲು ಪ್ರಮುಖ ಕಾರಣ, ಅಲ್ಲಿರುವ ತೈಲ ನಿಕ್ಷೇಪಗಳು.ಪೆಟ್ರೋಲ್ ಮತ್ತು ಡಿಸೇಲ್ ಎಲ್ಲರಿಗೂ ಅತ್ಯವಶ್ಯ,ಅದಕ್ಕಾಗಿ ಎಲ್ಲ ದೇಶದವರು ನಮ್ಮ ಮುಂದೆ ಮೊಣಕಾಲೂರಿ ಕೂಡಲೇಬೇಕು ಎಂಬುದು ಸದ್ದಾಮ್ ಉದ್ದೇಶವಾಗಿತ್ತು.ಅಹಂ ಮತ್ತು ದುಡ್ಡಿನ ಮಧದಿಂದ ಕೊಬ್ಬಿ ಹೋಗಿದ್ದ ಸದ್ದಾಮ್ ಯಾರನ್ನು ಕೇರ್ ಮಾಡುತ್ತಿರಲಿಲ್ಲ.ಅಮೆರಿಕವನ್ನೇ ಎದುರು ಹಾಕಿಕೊಂಡು ನಿರಂತರವಾಗಿ ಮೂರು ತಿಂಗಳ ಅದರೊಂದಿಗೆ ಯುದ್ದಕ್ಕಿಳಿದ.
ತನಗಾಗದವರನ್ನು ಯಾವತ್ತೂ ಅವನು ಜೀವಂತ ಉಳಿಸಲಿಲ್ಲ.ಅವನ ಅಧಿಕಾರ ಅವಧಿಯಲ್ಲಿ ಸಾಮೂಹಿಕ ಹತ್ಯೆಗಳ ಸರಮಾಲೆಗಳೇ ನಡೆದು ಹೋದವು.ಯಾರ ಮೇಲಾದರೂ ಸ್ವಲ್ಪೇ ಸ್ವಲ್ಪ ಡೌಟ್ ಬಂದರೂ,ಸದ್ದಾಂ ಅಂತವರನ್ನು ಶಾಶ್ವತವಾಗಿ ಜೈಲಿಗೆ ದೂಡಿಬಿಡುತ್ತಿದ್ದ.ಈ ಅವಧಿಯಲ್ಲಿ ಲೆಕ್ಖವಿಲ್ಲದಷ್ಟು ಜನ 'ಕಣ್ಮರೆಯಾದರು'.ತನ್ನ ದೇಶದ ನಾಗರಿಕರನ್ನಷ್ಟೇ ಅಲ್ಲದೇ ಅಕ್ಕಪಕ್ಕದ ದೇಶದವರನ್ನೂ ಸದ್ದಾಮ್ ನಿರ್ಧಯವಾಗಿ ಕೊಲ್ಲಿಸುತ್ತಿದ್ದ.ಇರಾಕ್ ನ ನೆರೆ ರಾಷ್ಟ್ರವಾದ ಕರ್ಧಿಶ್ ನ ಇಪ್ಪತ್ತು ಸಾವಿರ ಜನರನ್ನು ಅತ್ಯಂತ ಅಮಾನುಷವಾಗಿ ಸದ್ದಾಮ್ ಕೊಲ್ಲಿಸಿದ.
ಕ್ರೂರತನದಲ್ಲಿ ಅಡಾಲ್ಫ್ ಹಿಟ್ಲರ್ ನ ಸೋದರನಿಂತಿದ್ದ ಸದ್ದಾಮ್ ಹುಸೇನ್ ನನ್ನು ಅಮೆರಿಕದ ಸೇನೆ ಬಂದಿಸುವ ಮೂಲಕ ಅವನ ಹೀನ ಅಧ್ಯಾಯ ಅಂತ್ಯಗೊಂಡಿತು.೨೦೦೭ ರ ಮಾರ್ಚ್ ತಿಂಗಳಲ್ಲಿ ಅಮೆರಿಕಾದಿಂದ ಮರಣ ದಂಡನೆಗೆ ಈಡಾಗಿ ಸದ್ದಾಮ್ ಕೊನೆಯುಸಿರೆಳೆದಾಗ ಭಾರತವೂ ಸೇರಿದಂತೆ ಹಲವು ರಾಷ್ಟ್ರ ಗಳಲ್ಲಿನ ಮುಸ್ಲೀಮರು ಅಮೆರಿಕದ ವಿರುದ್ದ ಪ್ರತಿಭಟನೆ ಮಾಡಿದರು.ಆದರೆ ಇರಾಕ್ ಜನ ಮಾತ್ರ ಸದ್ದಾಮ್ ಸತ್ತ ಸುದ್ದಿ ಕೇಳಿ ಸಂಬ್ರಮದಿಂದ ಕುಣಿದಾಡಿದರು!
No comments:
Post a Comment